ಸದ್ಯ ಕೊನೆಯ ಹಂತದ ನಿರ್ಮಾಣದಲ್ಲಿರುವ ಕೆಜಿಎಫ್-2 ಚಿತ್ರಕ್ಕೆ ಮತ್ತೊಬ್ಬ ದಕ್ಷಿಣ ಭಾರತದ ಹಿರಿಯ ನಟಿ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್-2 ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ಬಂದಿದೆ. ಈ ವೇಳೆ ದಕ್ಷಿಣ ಭಾರತದ ಹಿರಿಯ ನಟಿ ಈಶ್ವರಿ ರಾವ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ದಕ್ಷಿಣ ಭಾರತದಲ್ಲಿ ತೆಲುಗು, ತಮಿಳು, ಮಾಲಿಯಾಳಂ ಸೇರಿದಂತೆ ಕನ್ನಡದಲ್ಲೂ ನಟನೆ ಮಾಡಿರುವ ಈಶ್ವರಿ ರಾವ್, ಕೆಜಿಎಫ್-2 ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಿರುವು ಕೊಡುವ ಒಂದು ಪಾತ್ರದಲ್ಲಿ ಈಶ್ವರಿಯವರು ನಟಿಸಿದ್ದಾರೆ ಎಂದು ಹೇಳಲಾಗಿದೆ.
ಆದರೆ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ವಿಚಾರ ಈಶ್ವರಿಯವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ದಕ್ಷಿಣ ಭಾರತದಲ್ಲೇ ಖ್ಯಾತ ನಟಿಯಾಗಿರುವ ಈಶ್ವರಿ ರಾವ್, ಪಂಚಭಾಷಾ ತಾರೆ. ಕೆಲ ಬಾಲಿವುಡ್ ಚಿತ್ರಗಳಲ್ಲೂ ನಟಿಸಿರುವ ಈಶ್ವರಿ 90ರ ದಶಕದಲ್ಲಿ ರಜನಿಕಾಂತ್, ಕಮಲ್ ಹಾಸನ್ ನಂತಹ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ. ಇತ್ತೀಚೆಗೆ ಬಿಡುಗಡೆಯಾದ ರಜಿನಿಕಾಂತ್ ಅವರ ಕಾಲ ಚಿತ್ರದಲ್ಲೂ ಈಶ್ವರಿ ನಟಿಸಿದ್ದಾರೆ. 1995ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಮೇಘ ಮಾಲೆ ಎಂಬ ಕನ್ನಡ ಚಿತ್ರದಲ್ಲೂ ಈಶ್ವರಿಯವರು ಅಭಿನಯಿಸಿದ್ದರು.
ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...
ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...

-
ಅಕಾಲಿಕ ಚರ್ಮದ ವಯಸ್ಸನ್ನು ಕಡಿಮೆ ಮಾಡಲು 11 ಮಾರ್ಗಗಳು ಅನೇಕ ಅಂಶಗಳು ನಮ್ಮ ಚರ್ಮಕ್ಕೆ ವಯಸ್ಸಾಗಲು ಕಾರಣವಾಗುತ್ತವೆ. ಕೆಲವು ವಿಷಯಗಳ ಬಗ್ಗೆ ನಾವು ಏನನ್ನೂ ಮಾಡಲು ಸಾಧ್ಯ...
-
ಕಿರಿ ಕಿರಿ ಉಂಟು ಮಾಡುವ ಕಿವಿ ತುರಿಕೆಗೆ ಇಲ್ಲಿದೆ ಸರಳ ಮನೆಮದ್ದು ಇದರಿಂದ ಕಿವಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ನಿರ್ಮಾಣವಾಗಬಹುದು. ಇಂತಹ ವೇಳೆ ಕಿವಿಯನ್ನು ...
-
ಮೆಂತ್ಯದ ಆಘಾತಕಾರಿ ಪ್ರಯೋಜನಗಳು ಮೆಂತ್ಯವು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ ಮಾತ್ರವಲ್ಲದೆ ತ್ವರಿತ ಶಕ್ತಿಯ ಗುಣಗಳನ್ನು ಹೊಂದಿದೆ. ಪೌಷ್ಟಿಕತಜ್ಞರು ಹೇಳುತ್ತಾರೆ, ಮಕ್...
-
ಪದೇ ಪದೇ ಕಫ ಕಟ್ಟಿಕೊಳ್ಳುವುದೇಕೆ? ಈ ಸಮಸ್ಯೆಗೆ ಪರಿಹಾರ ಇಲ್ಲಿದೆ ಕಫವು ಉಸಿರಾಟದ ವ್ಯವಸ್ಥೆಯ ಲೋಳೆಯ ಪೊರೆಗಳಿಂದ ಉತ್ಪತ್ತಿಯಾಗುತ್ತದೆ. ವಿಶೇಷವಾಗಿ ಶ್ವಾಸಕೋಶಗಳು...
-
ಹೊಯ್ಸಳ ಸಾಮ್ರಾಜ್ಯ 10 ನೇ ಮತ್ತು 14 ನೇ ಶತಮಾನಗಳ ನಡುವೆ ಭಾರತದ ಉಪಖಂಡದಿಂದ ಹುಟ್ಟಿದ ಕನ್ನಡಿಗ ಶಕ್ತಿಯು ಈಗ ಕರ್ನಾಟಕ, ಭಾರತವನ್ನು ಆಳಿದೆ. ಹೊಯ್ಸಳರ ರಾಜಧಾನಿ ಆರಂಭ...
-
ಶಿವನ 15 ಅದ್ಭುತ ಮಂತ್ರಗಳು: 1. ಓಂ ಶಿವಾಯ ನಮಃ 2. ಓಂ ಸರ್ವಾತ್ಮನೇ ನಮಃ 3. ಓಂ ತ್ರಿನೇತ್ರಾಯ ನಮಃ 4. ಓಂ ಹರಾಯ ನಮಃ 5. ಓಂ ಇಂದ್ರಮುಖಾಯ ನಮಃ 6. ಓಂ ಶ್ರೀಕಂಠಾಯ ನಮಃ ...
-
ನವದೆಹಲಿ: ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಧಾನ್ಯ ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ಇನ್ನೂ ಐದು ತಿಂಗಳು ವಿಸ್ತ...
-
ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತ...