In this video, we explore how incorporating ginger into your daily routine can help with weight loss. Learn the benefits of ginger, its role in boosting metabolism, and how you can easily add it to your diet for faster results. Watch till the end to find out the best way to use ginger for effective weight loss.
Key Points:
Health benefits of ginger
Ginger's effect on metabolism
How to use ginger for weight loss
Daily ginger routine for better results
Ginger for weight loss
Daily ginger benefits
Weight loss tips
Ginger health benefits
Metabolism booster
Natural weight loss remedies
How to lose weight with ginger
Weight loss secret
Healthy weight loss methods
Best ways to use ginger
#WeightLoss#GingerForWeightLoss#HealthyLiving#MetabolismBoost#NaturalRemedies#WeightLossTips#DailyGinger#HealthBenefits#LoseWeightNaturally#GingerHealth
Welcome to Kannada Mission TV YouTube channel
Hello! On Kannada Mission TV, you’ll get valuable insights from various prophets, gurus, and popular thinkers on current issues, religious topics, humanity, and social thoughts. Our channel offers daily videos on religious teachings, cultural programs, community service, and personal development. Explore new ideas and support us wholeheartedly on our channel!
Stay up to date with Science, Current Affairs, Kannada GK videos, Life Tips, Life Tricks, Natural Health Tips, Real Facts, Motivational videos, Inspirational Videos, Sarala Vaasthu, Hindu Culture, Indian Culture, Sandalwood News, Kannada Astrology, Amazing videos, Natural Comedy Videos, Health Tips in Kannada, Beauty Tips in Kannada, Kannada News updates, Kannada Astrology, Movies, Kannada Tech videos.., Kannada Motivations Videos available in this Channel.
Don’t forget to subscribe and hit the notification bell to never miss an update !
Thank You 🙏🏻🙏🏻
Enjoy and stay connected with us !!
LIKE, SHARE AND SUBSCRIBE Kannada Mission TV Channel
#kannadamissiontv#KannadaMissionTV#ReligiousTeachings#SocialAwareness#Humanity#CulturalPrograms#CommunityService#SpiritualGrowth#KannadaContent#Inspiration#MotivationalTalks#PersonalDevelopment#ReligiousPrograms#SocialIssues#KarnatakaCulture#KannadaTV#KannadaHealthTips
ಇಂದು ನಾವು ಕನ್ನಡಿಗರ ಪರಂಪರೆ ಯೋಗ್ಯವಾದ ಒಂದು ಪರಿಣಾಮಕಾರಿ ಆರೋಗ್ಯ ಉಪಾಯವನ್ನು ಹಂಚಿಕೊಳ್ಳೋಣ - ಬಿಸಿನೀರು ಮತ್ತು ಕರಿಮೆಣಸು. ಈ ಟಿಪ್ ಅನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ, ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯವಾಗುತ್ತದೆ ಮತ್ತು ಆಯುಷ್ಯ ವೃದ್ಧಿಗೆ ಸಹಕಾರಿಯಾಗಬಹುದು. ಇದನ್ನು ಪ್ರತಿದಿನವೂ ಸೇವಿಸಿದರೆ, ನೀವು 100 ವರ್ಷ ಜೀವಿಸುವೆ ಎಂದು ಹೇಳಬಹುದು! ನೀವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ವಿಡಿಯೋವನ್ನು ನೋಡಿ."
Durva Benefits: ಗರಿಕೆ ಕಸ ಅಂತ ಎಸೆಯಬೇಡಿ, ಇದರಲ್ಲೂ ಅಡಗಿದೆ ನಾನಾ ಆರೋಗ್ಯ ಲಾಭ!
ಗರಿಕೆಯನ್ನು ಅನೇಕ ಧಾರ್ಮಿಕ ಪೂಜೆ ವಿಧಿ ವಿಧಾನಗಳಲ್ಲಿ ಬಳಸುತ್ತಾರೆ. ಗರಿಕೆಯು ಪೋಷಕಾಂಶ ಸಮೃದ್ಧವಾಗಿದೆ. ಗರಿಕೆಯು ಆಯುರ್ವೇದ ಔಷಧದಲ್ಲಿ ಸಾಂಪ್ರದಾಯಿಕ ಮೂಲಿಕೆಯಾಗಿ ಬಳಕೆ ಮಾಡಲಾಗುತ್ತದೆ. ಗರಿಕೆಯಲ್ಲಿರುವ ಔಷಧೀಯ ಗುಣಗಳು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ.
ದೂರ್ವೆ ಹುಲ್ಲಿನ ಬಗ್ಗೆ ನಿಮಗೆ ಗೊತ್ತಿದೆ. ಇದನ್ನು ಹೆಚ್ಚಾಗಿ ಜನರು ದೇವರ ಪೂಜೆಗೆ ಬಳಸುತ್ತಾರೆ. ಗಣೇಶ ದೇವರಿಗೆ ಅರ್ಪಿಸಲು ಬಳಸುತ್ತಾರೆ. ಯಾರು ಗಣಪತಿಯ ಪೂಜೆ, ಭಕ್ತಿಯ ಆಚರಣೆ ಮಾಡುತ್ತಾರೋ ಅವರಿಗೆ ದೂರ್ವೆಯ ಮಹತ್ವ ಗೊತ್ತಿದೆ. ಇದನ್ನು ಗರಿಕೆ ಎಂದು ಕರೆಯುತ್ತಾರೆ. ಈ ಗರಿಕೆಯು ದೇವರಿಗೆ ಹಾಗೂ ಆರೋಗ್ಯಕ್ಕೆ ಶ್ರೇಷ್ಠವಾಗಿದೆ. ಗರಿಕೆಯ ರಸ ಕುಡಿದರೆ ಆರೋಗ್ಯ ವರ್ಧಕ ಎಂದು ಹೇಳಲಾಗುತ್ತದೆ.
ಗರಿಕೆಯನ್ನು ಅನೇಕ ಧಾರ್ಮಿಕ ಪೂಜೆ ವಿಧಿ ವಿಧಾನಗಳಲ್ಲಿ ಬಳಸುತ್ತಾರೆ. ಗರಿಕೆಯು ಪೋಷಕಾಂಶ ಸಮೃದ್ಧವಾಗಿದೆ. ಗರಿಕೆಯು ಆಯುರ್ವೇದ ಔಷಧದಲ್ಲಿ ಸಾಂಪ್ರದಾಯಿಕ ಮೂಲಿಕೆಯಾಗಿ ಬಳಕೆ ಮಾಡಲಾಗುತ್ತದೆ. ಗರಿಕೆಯಲ್ಲಿರುವ ಔಷಧೀಯ ಗುಣಗಳು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ.
ಗರಿಕೆಯಲ್ಲಿ ಹಲವು ಔಷಧೀಯ ಗುಣಗಳಿವೆ. ಗರಿಕೆ ಒಂದು ತಂಪುಗೊಳಿಸುವ ಮೂಲಿಕೆ ಆಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ಮೈಬಣ್ಣವನ್ನು ಸುಧಾರಿಸುತ್ತದೆ ಮತ್ತು ಅನೇಕ ಚರ್ಮದ ಸಮಸ್ಯೆ ನಿವಾರಣೆಗೆ ಗರಿಕೆ ಸಹಾಯ ಮಾಡುತ್ತದೆ. ಸನ್ಬರ್ನ್ ಮತ್ತು ಶಾಖದಲ್ಲಿ ಶ್ರೀಗಂಧದ ಪುಡಿ ಜೊತೆ ಗರಿಕೆ ರಸದ ಲೇಪನ ಮಾಡುವುದು ಪ್ರಯೋಜನಕಾರಿಯಾಗಿದೆ.
ಗರಿಕೆಯಲ್ಲಿ ಸೈನೊಡಾನ್ ಡ್ಯಾಕ್ಟಿಲೋನ್ ಎಂಬ ಜೀವರಾಸಾಯನಿಕ ಸಂಯುಕ್ತ ಇದೆ. ಇದು ಹೈಪೊಗ್ಲಿಸಿಮಿಕ್ ಪರಿಣಾಮ ಹೊಂದಿದೆ. ಮತ್ತು ಮಧುಮೇಹ ಮತ್ತು ಪಿಸಿಓಎಸ್ ನಲ್ಲಿ ರಕ್ತದ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಪ್ರತಿರೋಧ ನಿಯಂತ್ರಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಗರ್ಭಾಶಯದ ರಕ್ತಸ್ರಾವ, ರಕ್ತಸಿಕ್ತ ಪೈಲ್ಸ್, ಹೆಮರಾಜಿಕ್ ಅತಿಸಾರ ಕಡಿಮೆ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಗರಿಕೆಯಲ್ಲಿರುವ ಸೈನೊಡಾನ್ ಡ್ಯಾಕ್ಟಿಲಾನ್ ಜೈವಿಕ ರಾಸಾಯನಿಕ ಪದಾರ್ಥಗಳು ದೇಹದ ಆರೋಗ್ಯ ಕಾಪಾಡುತ್ತವೆ. ಇದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಗರಿಕೆಯು ಅತ್ಯಂತ ಅಗ್ಗದ ಮತ್ತು ಬಾಳಿಕೆ ಬರುವ ರೋಗ ನಿರೋಧಕ ಶಕ್ತಿ ಬೂಸ್ಟರ್ ಎಂದೇ ಕರೆಯಲಾಗುತ್ತದೆ.
ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಹೈಪೊಗ್ಲಿಸಿಮಿಕ್ ಪರಿಣಾಮ ಹೊಂದಿದೆ ಗರಿಕೆ. ಕೆಲವು ಬೇವಿನ ಎಲೆಯ ಜೊತೆ ಗರಿಕೆ ಮಿಕ್ಸ್ ಮಾಡಿ, ರಸ ತೆಗೆದು ಸೇವಿಸಿದರೆ ಮಧುಮೇಹ ಸಂಬಂಧಿ ಸಮಸ್ಯೆ ತಡೆಗೆ ಹೋರಾಡಲು ಇದು ಸಹಾಯ ಮಾಡುತ್ತದೆ. ರಕ್ತದ ಸಕ್ಕರೆ ಏರಿಕೆ ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ದುರ್ವೆ ರಸ ಸೇವಿಸಬಹುದು.
ಗರಿಕೆ ರಸ ಸೇವನೆಯು ಋತುಚಕ್ರವನ್ನು ದೀರ್ಘಕಾಲದವರೆಗೆ ನಿಯಂತ್ರಿಸುತ್ತದೆ. ಭಾರೀ ರಕ್ತಸ್ರಾವ ನಿಯಂತ್ರಿಸಲು ಮತ್ತು ಪಿಸಿಓಎಸ್ ಗುಣಪಡಿಸಲು ಪ್ರಬಲವಾದ ಗಿಡಮೂಲಿಕೆ ಮತ್ತು ಪರಿಹಾರವಾಗಿದೆ. ಇದು ನೈಸರ್ಗಿಕ ಮೂತ್ರವರ್ಧಕ. ಇದು ಮೂತ್ರನಾಳದ ಸೋಂಕಿನ ಚಿಕಿತ್ಸೆಗೆ ಸಹಕಾರಿ. ಅಸಿಡಿಟಿ ಮತ್ತು ಮೂತ್ರದಲ್ಲಿ ಸುಡುವ ಸಂವೇದನೆ ಕಡಿಮೆ ಮಾಡುತ್ತದೆ.
ಚರ್ಮದ ಆರೋಗ್ಯ ಕಾಪಾಡುತ್ತದೆ. ಎಸ್ಜಿಮಾ, ಸೋರಿಯಾಸಿಸ್, ಗಾಯ ಮತ್ತು ಶಿಲೀಂಧ್ರ ಸೋಂಕು ಸೇರಿ ಹಲವು ಚರ್ಮ ರೋಗಗಳ ಸಮಸ್ಯೆ ತೊಡೆದು ಹಾಕಲು ಪ್ರಯೋಜನಕಾರಿಯಾಗಿದೆ. ಗರಿಕೆಯು ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ಚರ್ಮದ ದದ್ದು, ಎಸ್ಜಿಮಾ, ತುರಿಕೆ ಸಮಸ್ಯೆ ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಇದರ ರಸ ಸೇವಿಸಿದರೆ ದೇಹ ನಿರ್ವಿಷವಾಗುತ್ತದೆ. ಹಲ್ಲಿನ ಆರೋಗ್ಯ ಕಾಪಾಡುತ್ತದೆ. ಬಾಯಿ ಹುಣ್ಣು, ಗಾಯದ ಸಮಸ್ಯೆ ತಡೆಯುತ್ತದೆ.
ನಿದ್ರೆ ಪ್ರತಿಯೊಬ್ಬರ ಬದುಕಿನಲ್ಲಿ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದು. ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಮಾನಸಿಕ ನೆಮ್ಮದಿಯನ್ನು ನೀಡುವುದರ ಜೊತೆ ಜೊತೆಗೆ ದೈಹಿಕ ಆರೋಗ್ಯದ ಸಮತೋಲನದಲ್ಲಿಯೂ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದರೆ ಈ ಸುಖಕರವಾದ ನಿದ್ದೆ ಮಾಡುವಾಗ ಪಕ್ಕದಲ್ಲಿರುವವರ ಗೊರಕೆ ಸದ್ದು ನಮ್ಮ ಸುಂದರ ಕನಸಿನ ನಿದ್ದೆಯನ್ನು ಹಾಳು ಮಾಡಿಬಿಡಬಹುದು.
ನಿಮ್ಮ ಮನೆಯಲ್ಲಿರುವವರ ಗೊರಕೆಯ ಸಮಸ್ಯೆ ನಿಮ್ಮ ನಿದ್ದೆಯನ್ನು ಹಾಳುಮಾಡುತ್ತಿರಬಹುದು. ಅದೆಷ್ಟೋ ಸನ್ನಿವೇಶಗಳಲ್ಲಿ ಈ ಗೊರಕೆಯ ಸಮಸ್ಯೆ ಗಂಡ -ಹೆಂಡತಿಯರ ದಾಂಪತ್ಯ ಬದುಕಿನ ಮೇಲೆ ಪ್ರಭಾವ ಬೇರುವ ಮೂಲಕ ದಂಪತಿಗಳು ಪರಸ್ಪರ ದೂರವಾಗುವ ಸನ್ನೆವೇಶಗಳನ್ನು ನಾವು ಕೇಳಿದ್ದೇವೆ. ಆದರೆ ಗೊರಕೆಯಂತಹ ಸಮಸ್ಯೆ ಹೊಂದಿರುವ ವ್ಯಕ್ತಿಯನ್ನು ದೂರ ತಳ್ಳುವುದರ ಬದಲಾಗಿ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಒಂದು ವೇಳೆ ನಿಮ್ಮ ಜೊತೆಗಿರುವವರಲ್ಲಿ ಗೊರಕೆಯ ಸಮಸ್ಯೆ ಇದ್ದರೆ ಅಥವಾ ನಿಮಗೆ ಈ ಸಮಸ್ಯೆ ಇದ್ದರೆ ಕೆಳಕಂಡ ವಿಧಾನವನ್ನು ಪಾಲಿಸಿ ಗೊರಕೆ ಸಮಸ್ಯೆಯಿಂದ ಪಾರಾಗಬಹುದಾಗಿದೆ
ಸ್ಟೀಮ್ ತೆಗೆದುಕೊಳ್ಳುವುದು
ಸಾಮಾನ್ಯವಾಗಿ ಶೀತ ಅಥವಾ ಜ್ವರದಂತಹ ಸಮಸ್ಯೆಗಳಿದ್ದಾಗ ಮೂಗು ಕಟ್ಟಿ ಗೊರಕೆ ಹೊಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒಂದು ದೊಡ್ಡ ಬಟ್ಟಲಿನಲ್ಲಿ ಸ್ವಲ್ಪ ಬಿಸಿನೀರನ್ನು ಸುರಿಯಿರಿ. ಇದಕ್ಕೆ ನೀಲಗಿರಿ, ಬೇವು ಅಥವಾ ಯಾವುದೇ ಸಾರಭೂತ ಎಣ್ಣೆಯನ್ನು ಮೂರರಿಂದ ನಾಲ್ಕು ಹನಿಗಳನ್ನು ಸೇರಿಸಿ. ನಿಮ್ಮ ಮುಖವನ್ನು ನೀರಿನ ಹತ್ತಿರಕ್ಕೆ ತಂದ ನಂತರ, ನಿಮ್ಮ ತಲೆ ಮೇಲೆ ಟವೆಲ್ ಹಾಕಿ ಈ ಹಬೆಯನ್ನು ತೆಗೆದುಕೊಳ್ಳಿ. ಹಬೆಯನ್ನು ತೆಗೆದುಕೊಳ್ಳುವಾಗ ಉಚ್ಛ್ವಾಸ ಮತ್ತು ನಿಶ್ವಾಸಗಳನ್ನು ಮಾಡಿ ಇದರಿಂದ ಮೂಗಿನಲ್ಲಿ ಸಂಗ್ರಹವಾದ ಅಂಶ ಕರಗಿ ಸಮಸ್ಯೆ ಪರಿಹಾರವಾಗುತ್ತದೆ.
ಆಲ್ಕೊಹಾಲ್ ತ್ಯೆಜಿಸಿ
ಆಲ್ಕೊಹಾಲ್ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ಗಂಟಲಿನ ಹಿಂಭಾಗದಲ್ಲಿರುವ ಸ್ನಾಯುಗಳ ಮೇಲೆ ಉದ್ವೇಗವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ನಿಮ್ಮ ಗೊರಕೆಯ ಸಮಸ್ಯೆ ಹೆಚ್ಚಾಗುತ್ತದೆ. ತಂಬಾಕು ಹೊಗೆ, ಮತ್ತೊಂದೆಡೆ ಗಂಟಲಿನಲ್ಲಿರುವ ಲೋಳೆಯ ಪೊರೆಗಳನ್ನು ಕೆರಳಿಸಬಹುದು. ಆದ್ದರಿಂದ ಈ ಎರಡನ್ನೂ ನೀವು ಸಂಪೂರ್ಣವಾಗಿ ಬಿಟ್ಟುಬಿಡಲು ಸಾಧ್ಯವಾಗದಿದ್ದರೂ, ನೀವು ಆಲ್ಕೊಹಾಲ್ ಸೇವನೆ ಮತ್ತು ಸಿಗರೇಟ್ ಬಳಕೆ ಮಾಡುವ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಕೇವಲ ಗೊರಕೆ ಸಮಸ್ಯೆ ಮಾತ್ರವಲ್ಲದೆ ಆಲ್ಕೊಹಾಲ್ ಸೇವನೆಯಿಂದ ಕಂಡುಬರುವ ಹಲವಾರು ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ,
ಬೆಳ್ಳುಳ್ಳಿಯ ಬಳಕೆ
ಬೆಳ್ಳುಳ್ಳಿಯಲ್ಲಿ ಹಲವಾರು ರೋಗ ನಿರೋಧಕ ಅಂಶಗಳಿದ್ದು, ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ, ಬೆಳ್ಳುಳ್ಳಿಯ ಸೂಕ್ಷ್ಮಜೀವಿಯ ವಿರೋಧಿ ಗುಣಲಕ್ಷಣಗಳು ಮೂಗಿನ ಮಾರ್ಗದಲ್ಲಿರುವ ಲೋಳೆ ತೊಡೆದುಹಾಕಲು ಸಹಾಯ ಮಾಡುತ್ತದೆ. ಬರೀ ಸಾಮಾನ್ಯ ಶೀತದಿಂದಾಗಿ ನೀವು ಗೊರಕೆ ಹೊಡೆಯುತ್ತಿದ್ದರೆ, ಬೆಳ್ಳುಳ್ಳಿ ನಿಮಗೆ ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಹಸಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಅಗಿಯಿರಿ. ನಂತರ ಒಂದು ಲೋಟ ನೀರನ್ನು ಕುಡಿಯಿರಿ. ಮಲಗುವ ಮುನ್ನ ಕನಿಷ್ಠ 20 ರಿಂದ 30 ನಿಮಿಷಗಳಾದರೂ ಇದನ್ನು ಅನುಸರಿಸುವುದು ಉತ್ತಮ.
ಬಿಸಿ ನೀರಿನ ಬಳಕೆ
ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಬಿಸಿ -ಬಸಿಯಾದ ನೀರನ್ನು ಸೇವನೆ ಮಾಡುವುದರಿಂದ ಸಾಮಾನ್ಯ ಶೀತದಿಂದ ಗಂಟಲಿನಲ್ಲಿ ಸಂಗ್ರಹವಾಗಿರುವ ಲೋಳೆಯಂತಹ ಅಂಶ ಕರಗುತ್ತದೆ. ಇದರಿಂದ ಗೊರಕೆ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಅರಿಶಿನ ಬಳಕೆ
ಸಾಮಾನ್ಯವಾಗಿ ಎಲ್ಲಾ ವಿಧವಾದ ಆರೋಗ್ಯ ಸಮಸ್ಯೆಗಳಿಗೆ ಅರಶಿನದ ಬಳಕೆ ಅತ್ಯಂತ ಪ್ರಮುಖವಾದ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಇದು ಪ್ರಬಲವಾದ ನಂಜು ನಿರೋಧಕ ಎಂದು ತಿಳಿದುಬಂದಿದೆ. ಇದು ನಿಮ್ಮ ಗೊರಕೆ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತದೆ. ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತಾಜಾ ಅರಿಶಿನ ಪುಡಿಯನ್ನು ಸೇರಿಸಿ, ಮಲಗುವ ಮುನ್ನ ಬೆರೆಸಿ ಕುಡಿಯಿರಿ. ಹೀಗೆ ಅರಶಿನವನ್ನು ಸೇವನೆ ಮಾಡುವುದರಿಂದ ಸಮಸ್ಯೆಯಿಂದ ಬಹುಬೇಗ ಗುಣಮುಖವಾಗಬಹುದಾಗಿದೆ.
ಏಲಕ್ಕಿ
ಭಾರತೀಯ ಆಹಾರ ಪರಂಪರೆಯಲ್ಲಿ ಹಲವಾರು ಮಸಾಲೆಗಳಿದ್ದು, ಇವುಗಳು ತನ್ನಲ್ಲಿ ಬಹಳಷ್ಟು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಅವುಗಳಲ್ಲಿ ಏಲಕ್ಕಿ ಕೂಡಾ ಒಂದು . ಈ ಮಸಾಲೆ ಅತ್ಯುತ್ತಮ ಎಕ್ಸ್ಪೆಕ್ಟೊರೆಂಟ್ ಮತ್ತು ಡಿಕೊಂಜೆಸ್ಟೆಂಟ್ ಆಗಿದೆ. ಇದರಿಂದಾಗಿ ಉಸಿರಾಟದ ಜಾಗದ ಉದ್ದಕ್ಕೂ ಗಾಳಿಯನ್ನು ಸ್ಪಷ್ಟವಾಗಿ ಸಾಗಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ ಸುಮಾರು ಒಂದೂವರೆ ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಮಲಗುವ ಮುನ್ನ ಕನಿಷ್ಠ ಅರ್ಧ ಘಂಟೆಯಾದರೂ ಮುಂಚೆ ಕುಡಿಯಿರಿ.
ಚರ್ಮದ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಬದಲಾದ ಜೀವನಶೈಲಿ, ಒತ್ತಡದ ಬದುಕು, ಸರಿಯಾಗಿ ನಿದ್ದೆ ಇಲ್ಲದೇ ಇರುವುದು, ಬಿಸಿಲಿನಲ್ಲಿ ಓಡಾಟ, ನಿರ್ಜಲೀಕರಣ ಹೀಗೆ ಅನೇಕ ಕಾರಣಗಳಿಂದ ಚರ್ಮ ಡ್ರೈ ಆಗಿ ಕಾಂತಿಯನ್ನು ಕಳೆದುಕೊಳ್ಳಬಹುದು.
ಹೀಗಾಗಿ ಸದಾ ಕಾಲ ಮೇಕಪ್ ಮೊರೆ ಹೋಗಬೇಕಾದ ಸ್ಥಿತಿ ಇರುತ್ತದೆ. ಆದರೆ ಇದರಿಂದ ಮುಖಕ್ಕೆ ಹಾನಿಯೇ ಹೆಚ್ಚು. ಹಾಗಾದರೆ ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು
ಅರಿಶಿನ, ಲಿಂಬು ರಸ
ಸಾರ್ವಕಾಲಿಕವಾಗಿ ಮುಖದ ಸೌಂದರ್ಯ ವೃದ್ಧಿಗೆ ಅರಿಶಿನವನ್ನು ಬಳಕೆ ಮಾಡುವುದು ಗೊತ್ತೆ ಇದೆ. ಇನ್ನು ಲಿಂಬು ರಸ ನೈಸರ್ಗಿಕವಾಗಿ ಮುಖಕ್ಕೆ ಬ್ಲೀಚ್ ಆಗುವಂತೆ ಮಾಡುತ್ತದೆ. ಹೀಗಾಗಿ ಮುಖ ಬೆಳ್ಳಗಾಗುತ್ತದೆ.
ಹೀಗೆ ಮಾಡಿ
ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಒಂದು ಚಮಚ ಅರಿಶಿನ ಪುಡಿಗೆ ಅರ್ಧ ಚಮಚ ಲಿಂಬು ರಸ, ಅರ್ಧ ಚಮಚ ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಮುಖಕ್ಕೆ ಅದನ್ನು ಹಚ್ಚಿ.
ಅರ್ಧಗಂಟೆ ಬಿಟ್ಟು ತಣ್ಣನೆಯ ನೀರಿನಿಂದ ಮುಖವನ್ನು ತೊಳೆದು, ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ವಾರದಲ್ಲಿ ಎರಡು ಬಾರಿಯಾದರೂ ಇದನ್ನು ಮಾಡಿ ಮುಖದ ಅಂದ ಹೆಚ್ಚುತ್ತದೆ.
ಅರಿಶಿನ, ಲಿಂಬು ರಸ
ಸಾರ್ವಕಾಲಿಕವಾಗಿ ಮುಖದ ಸೌಂದರ್ಯ ವೃದ್ಧಿಗೆ ಅರಿಶಿನವನ್ನು ಬಳಕೆ ಮಾಡುವುದು ಗೊತ್ತೆ ಇದೆ. ಇನ್ನು ಲಿಂಬು ರಸ ನೈಸರ್ಗಿಕವಾಗಿ ಮುಖಕ್ಕೆ ಬ್ಲೀಚ್ ಆಗುವಂತೆ ಮಾಡುತ್ತದೆ. ಹೀಗಾಗಿ ಮುಖ ಬೆಳ್ಳಗಾಗುತ್ತದೆ.
ಹೀಗೆ ಮಾಡಿ
ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಒಂದು ಚಮಚ ಅರಿಶಿನ ಪುಡಿಗೆ ಅರ್ಧ ಚಮಚ ಲಿಂಬು ರಸ, ಅರ್ಧ ಚಮಚ ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಮುಖಕ್ಕೆ ಅದನ್ನು ಹಚ್ಚಿ.
ಅರ್ಧಗಂಟೆ ಬಿಟ್ಟು ತಣ್ಣನೆಯ ನೀರಿನಿಂದ ಮುಖವನ್ನು ತೊಳೆದು, ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ವಾರದಲ್ಲಿ ಎರಡು ಬಾರಿಯಾದರೂ ಇದನ್ನು ಮಾಡಿ ಮುಖದ ಅಂದ ಹೆಚ್ಚುತ್ತದೆ.
ಟೊಮೆಟೋ ಬಳಕೆ
ಹುಳಿ ಅಂಶವಿರುವ ಟೊಮೆಟೋ ಮುಖಕ್ಕೆ ನೈಸರ್ಗಿಕ ಬ್ಲೀಚ್ನಂತೆ ಕೆಲಸ ಮಾಡುತ್ತದೆ. ಟೊಮೆಟೋವನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆ, ಕೊಳೆ ಎಲ್ಲವೂ ಸ್ವಚ್ಛವಾಗಿ ಮುಖ ಬೆಳಗ್ಗೆ ಕಾಣುತ್ತದೆ. ಅಲ್ಲದೆ ಸನ್ ಟ್ಯಾನ್ ಹೋಗಲಾಡಿಸಲೂ ಸಹ ಟೊಮೆಟೋ ಫೇಸ್ ಪ್ಯಾಕ್ನ್ನು ಬಳಸಬಹುದಾಗಿದೆ.
ಹೀಗೆ ಮಾಡಿ
ಟೊಮಟೋವನ್ನು ಅರ್ಧ ಕತ್ತರಿಸಿ ನಂತರ ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ. ನಂತರ 10 ನಿಮಿಷ ಬಿಟ್ಟು ತಣ್ಣೀರಿನಿಂದ ಒರೆಸಿಕೊಳ್ಳಿ.
ಅಥವಾ ಅರ್ಧ ಕತ್ತರಿಸಿದ ಟೊಮೆಟೋಗೆ ಚಿಟಿಕೆ ಸಕ್ಕರೆ ಹಾಕಿ ಮುಖಕ್ಕೆ ಹಾಕಿ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಮುಖಕ್ಕೆ ನೈಸರ್ಗಿಕ ಸ್ಕೃಬ್ ಆದಂತಾಗುತ್ತದೆ. ಹೀಗಾಗಿ ಸತ್ತ ಜೀವಕೋಶಗಳು ಹೋಗಿ ಕಾಂತಿಯುತ ಚರ್ಮವನ್ನು ಪಡೆಯಬಹುದಾಗಿದೆ.
ಶ್ರೀಗಂಧದ ಬಳಕೆ
ಶ್ರೀಗಂಧ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಚರ್ಮದ ಮೇಲಿನ ಕಪ್ಪು ಕಲೆ ನಿವಾರಿಸಿ, ಮುಖವನ್ನು ಕಾಂತಿಯುತಗೊಳಿಸಲು ಶ್ರೀಗಂಧ ಸಹಾಯ ಮಾಡುತ್ತದೆ. ಹೀಗಾಗಿ ನೀವು ಮುಖವನ್ನು ಬೆಳ್ಳಗಾಗಿಸಲು ಗಂಧದ ಫೇಸ್ಪ್ಯಾಕ್ನ್ನು ಬಳಸಬಹುದು.
ಹೀಗೆ ಮಾಡಿ
ಒಂದು ಚಮಚ ಶ್ರೀಗಂಧದ ಪುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ. ನಂತರ 10 ನಿಮಿಷ ಹಾಗೆಯೇ ಬಿಡಿ. ಒಣಗಿದ ಮೇಲೆ ನೀರು ಹಾಕಿ ಮುಖವನ್ನು ನಿಧಾನವಾಗಿ ಉಜ್ಜಿ. ಇದರಿಂದ ಮುಖದ ಮೇಲಿನ ಸತ್ತ ಜೀವಕೋಶಗಳು ನಾಶವಾಗಿ ಮುಖ ಕಾಂತಿಯುವಾಗುತ್ತದೆ.
ಪ್ರತಿಯೊಂದು ಮನೆಯಲ್ಲೂ ಒಂದಲ್ಲಾ ಒಂದು ಸಂದರ್ಭದಲ್ಲಿ ಊದುಬತ್ತಿ (ಅಗರಬತ್ತಿ) ಹಚ್ಚುತ್ತೇವೆ. ಪೂಜೆಯಾಗಲಿ ಅಥವಾ ಇನ್ನಿತರ ಶುಭ ಕಾರ್ಯವಿರಲಿ ಅಲ್ಲಿ ಗಂಧದಕಡ್ಡಿ ಇದ್ದೇ ಇರುತ್ತದೆ. ಅದರ ಪರಿಮಳ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವುದರಿಂದ ಯಾರು ಕೂಡ ಅದರ ಹೊಗೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಅದೇ ಅಗರಬತ್ತಿಯ ಹೊಗೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದರೆ ನಂಬುತ್ತೀರಾ?
ಹೌದು, ಸಿಗರೇಟ್ ಹೊಗೆಯಿಂದ ಹೇಗೆ ಕ್ಯಾನ್ಸರ್ ಬರುತ್ತದೆಯೋ, ಹಾಗೆಯೇ ಊದುಬತ್ತಿಯ ಹೊಗೆಯಿಂದಲೂ ಕ್ಯಾನ್ಸರ್ ಉಂಟಾಗುತ್ತದೆ. ಅಗರಬತ್ತಿಗಳಲ್ಲಿರುವ ಪಾಲಿ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು(Poly-Aromatic Hydrocarbons) ಕ್ಯಾನ್ಸರ್ಗೆ ಕಾರಣವಾಗಬಲ್ಲದು. ಇದರಿಂದ ಅಸ್ತಮಾದಂತಹ ಉಸಿರಾಟಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ಕೂಡ ಕಾಣಿಸಿಕೊಳ್ಳಬಹುದು. ಊದುಬತ್ತಿ ಹೊಗೆಯಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಹೃದಯಾಘಾತದ ಅಪಾಯ : ಊದುಬತ್ತಿಯ ಹೊಗೆ ನಿರಂತರ ಉಸಿರಾಟದ ಕ್ರಿಯೆಗೆ ತೊಂದರೆ ಮಾಡುವುದಲ್ಲದೆ, ಹೃದಯದ ಜೀವಕೋಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಜೀವಕೋಶದ ಶಕ್ತಿ ಕುಗ್ಗುವುದರಿಂದ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಕಣ್ಣುಗಳಿಗೆ ಹಾನಿಕಾರಕ : ಇದರ ಹೊಗೆಯಲ್ಲಿ ಕಂಡು ಬರುವ ರಾಸಾಯನಿಕಗಳು ಕಣ್ಣಿನ ತುರಿಕೆ ಹಾಗೂ ಚರ್ಮದ ಅಲರ್ಜಿಗೆ ಕಾರಣವಾಗಬಹುದು. ಹಾಗೆಯೇ ದೃಷ್ಟಿ ಹಾನಿಯಾಗುವ ಸಾಧ್ಯತೆ ಕೂಡ ಇದೆ.
ಶ್ವಾಸಕೋಶ ತೊಂದರೆ ಮತ್ತು ಕ್ಯಾನ್ಸರ್ : ಇದರಿಂದ ಹೊರಸೂಸುವ ಹೊಗೆಯು ಕಾರ್ಬನ್ ಮೋನೊ ಆಕ್ಸೈಡ್ ಅನ್ನು ಹೊಂದಿರುತ್ತದೆ. ಇದು ಶ್ವಾಸಕೋಶದ ಮೇಲೆ ಹಾನಿ ಉಂಟು ಮಾಡುತ್ತದೆ. ಇದರಿಂದಾಗಿ ಶೀತ ಮತ್ತು ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಊದುಬತ್ತಿಯ ಹೊಗೆಯನ್ನು ಉಸಿರಾಡುವುದರಿಂದ ಶಾಶ್ವಕೋಶದ ಕ್ಯಾನ್ಸರ್ ಸಂಭವಿಸುತ್ತದೆ. ಅದರಲ್ಲೂ ಧೂಮಪಾನಿಗಳಿಗೆ ಗಂಧದಕಡ್ಡಿಯ ಹೊಗೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಅಸ್ತಮಾದ ತೊಂದರೆ : ಅಗರಬತ್ತಿಯಲ್ಲಿ ನೈಟ್ರೊಜನ್ ಮತ್ತು ಸಲ್ಫರ್ ಡೈ ಆಕ್ಸೈಡ್ಗಳು ಕಂಡು ಬರುತ್ತದೆ. ಇದು ಆರೋಗ್ಯಕ್ಕೆ ತುಂಬ ಹಾನಿಕಾರಕ. ಇದರ ಹೊಗೆಯಿಂದ ಅಸ್ತಮಾದ ಸಮಸ್ಯೆಗಳು ಕೂಡ ಕಾಣಿಸುವ ಸಾಧ್ಯತೆಯಿದೆ.
ಮಲಗುವ ವ್ಯಕ್ತಿಯಿಂದ ಮೃದುವಾದ ಅಥವಾ ದೊಡ್ಡ ಶಬ್ದವನ್ನು ಗೊರಕೆ ಎಂದು ಕರೆಯಲಾಗುತ್ತದೆ. ಹೆಚ್ಚಿನ ವ್ಯಕ್ತಿಗಳಲ್ಲಿ ಗೊರಕೆ ಸಾಮಾನ್ಯವಾಗಿದೆ, ಆದರೆ ಆಧಾರವಾಗಿರುವ ಕಾರಣಗಳು ಬದಲಾಗಬಹುದು.
ಗೊರಕೆಯು ನಿಜವಾಗಿಯೂ ಒಂದು ರೋಗವಲ್ಲ ಆದರೆ ಹತ್ತಿರದಲ್ಲಿ ಮಲಗುವ ವ್ಯಕ್ತಿಯನ್ನು ನಿಜವಾಗಿಯೂ ಕೆರಳಿಸಬಹುದು. ಗೊರಕೆಯನ್ನು ನಿಲ್ಲಿಸಲು ನಿಜವಾಗಿಯೂ ಮಾರ್ಗಗಳಿವೆ. ಗೊರಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಲೇಖನವನ್ನು ಅಧ್ಯಯನ ಮಾಡಿ.
ಗೊರಕೆ ಎಂದರೇನು?
ಗೊರಕೆಯು ಉಸಿರಾಟದ ರಚನೆಗಳ ಕಂಪನ ಮತ್ತು ನಿದ್ರೆಯ ಸಮಯದಲ್ಲಿ ಅಡಚಣೆಯಾದ ಗಾಳಿಯ ಚಲನೆಯಿಂದ ಉಂಟಾಗುವ ಧ್ವನಿಯಾಗಿದೆ.
ಬಾಯಿ ಮತ್ತು ಮೂಗಿನ ಹಿಂಭಾಗದಲ್ಲಿರುವ ಮಾರ್ಗಗಳ ಮೂಲಕ ಗಾಳಿಯ ಹರಿವು ಭಾಗಶಃ ಅಡಚಣೆಯಾದಾಗ ಗೊರಕೆ ಸಾಮಾನ್ಯವಾಗಿ ಸಂಭವಿಸುತ್ತದೆ. ನಾಲಿಗೆ ಮತ್ತು ಗಂಟಲಿನ ಮೇಲ್ಭಾಗವು ಮೃದುವಾದ ಅಂಗುಳಿನ ಮತ್ತು ಉವುಲಾವನ್ನು ಸಂಧಿಸುವ ಪ್ರದೇಶವಾಗಿದೆ. ಈ ರಚನೆಗಳು ಘರ್ಷಣೆಗೊಂಡಾಗ ಮತ್ತು ಉಸಿರಾಡುವಾಗ ಕಂಪಿಸಿದಾಗ ಗೊರಕೆ ಉಂಟಾಗುತ್ತದೆ.
ಗೊರಕೆಯ ಕಾರಣಗಳು
ಮೂಗಿನ ಶ್ವಾಸನಾಳಗಳನ್ನು ನಿರ್ಬಂಧಿಸಲಾಗಿದೆ
ಉಸಿರುಕಟ್ಟಿಕೊಳ್ಳುವ ಅಥವಾ ದಟ್ಟಣೆಯ ಮೂಗಿನ ಮೂಲಕ ಉಸಿರಾಡುವುದು ಒಂದು ಕಾರ್ಯವಾಗಿದೆ. ಭಾಗಶಃ ನಿರ್ಬಂಧಿಸಿದ ಮೂಗಿನ ಮೂಲಕ ಉಸಿರಾಡುವಾಗ ಹೆಚ್ಚಿನ ಹೀರಿಕೊಳ್ಳುವ ಶಕ್ತಿಗಳನ್ನು ರಚಿಸಲಾಗುತ್ತದೆ. ಇದು ಗಂಟಲು ಕುಸಿಯಲು ಮತ್ತು ಗೊರಕೆಗೆ ಕಾರಣವಾಗಬಹುದು, ಏಕೆಂದರೆ ಉವುಲಾ ಮತ್ತು ಮೃದುವಾದ ಅಂಗುಳವು ಫ್ಲಾಪ್ ಮಾಡಲು ಪ್ರಾರಂಭಿಸುತ್ತದೆ.
ಗೊರಕೆಯು ಮೂಗು ಅಥವಾ ಮೂಗಿನ ಸೆಪ್ಟಮ್ ವಿರೂಪಗಳಿಂದಲೂ ವಿಚಲಿತವಾದ ಸೆಪ್ಟಮ್ನಂತೆ ಉಂಟಾಗಬಹುದು.
ಗಂಟಲು ಮತ್ತು ನಾಲಿಗೆಯಲ್ಲಿ ಕಳಪೆ ಸ್ನಾಯು ಟೋನ್
ಸ್ನಾಯುಗಳು ಅತಿಯಾಗಿ ವಿಶ್ರಾಂತಿ ಪಡೆದಾಗ, ನಾಲಿಗೆ ಮತ್ತೆ ವಾಯುಮಾರ್ಗಕ್ಕೆ ಬೀಳುತ್ತದೆ, ಅಥವಾ ಗಂಟಲಿನ ಸ್ನಾಯುಗಳು ಬದಿಗಳಿಂದ ಸೆಳೆಯುತ್ತವೆ. ನಿದ್ರೆ-ಪ್ರಚೋದಿಸುವ ಔಷಧಿಗಳು ಸ್ನಾಯುವಿನ ವಿಶ್ರಾಂತಿ ಮತ್ತು ಅಡಚಣೆಯನ್ನು ಉಲ್ಬಣಗೊಳಿಸಬಹುದು. ಇದರಿಂದ ಗೊರಕೆ ಉಂಟಾಗುತ್ತದೆ.
ಗಂಟಲಿನಲ್ಲಿ ಬೃಹತ್ ಅಂಗಾಂಶಗಳು
ದೊಡ್ಡ ಅಡೆನಾಯ್ಡ್ಗಳು ಮತ್ತು ಟಾನ್ಸಿಲ್ಗಳಿರುವ ಮಕ್ಕಳಲ್ಲಿ ಗೊರಕೆ ಸಾಮಾನ್ಯವಾಗಿದೆ. ಸ್ಥೂಲಕಾಯದ ಜನರ ಕುತ್ತಿಗೆಯಲ್ಲಿ ಹೆಚ್ಚಿನ ಅಂಗಾಂಶವು ಶ್ವಾಸನಾಳದ ಕಿರಿದಾಗುವಿಕೆಗೆ ಕಾರಣವಾಗಬಹುದು, ವ್ಯಕ್ತಿ ಗೊರಕೆ ಹೊಡೆಯುವಂತೆ ಮಾಡುತ್ತದೆ.
ದೊಡ್ಡ ನಾಲಿಗೆಯನ್ನು ಹೊಂದಿರುವ ಜನರಲ್ಲಿ ಗೊರಕೆ ಕೂಡ ಗಮನಾರ್ಹವಾಗಿದೆ. ಶ್ವಾಸನಾಳದ ಕಿರಿದಾಗುವಿಕೆಯ ಅಪರೂಪದ ಕಾರಣಗಳಲ್ಲಿ ಗೆಡ್ಡೆಗಳು ಮತ್ತು ಚೀಲಗಳು ಸೇರಿವೆ.
ಉದ್ದವಾದ ಮೃದು ಅಂಗುಳ
ಉದ್ದನೆಯ ಅಂಗುಳವು ಮೂಗಿನಿಂದ ಗಂಟಲಿನವರೆಗಿನ ದ್ವಾರವನ್ನು ಕಿರಿದಾಗಿಸುತ್ತದೆ. ಶಾಂತ ಉಸಿರಾಟದ ಸಮಯದಲ್ಲಿ, ಮೃದು ಅಂಗುಳಿನ ಮತ್ತು uvula ಅತಿಯಾದ ಉದ್ದವು ಗದ್ದಲದ ಬೀಸು ಕವಾಟವಾಗಿ ಕಾರ್ಯನಿರ್ವಹಿಸುತ್ತದೆ.
ಮದ್ಯ ಮತ್ತು ಮಾದಕವಸ್ತು ಬಳಕೆ
ಆಲ್ಕೋಹಾಲ್ ಕುಡಿಯುವುದರಿಂದ ಅಥವಾ ಅರೆನಿದ್ರಾವಸ್ಥೆ ಅಥವಾ ವಿಶ್ರಾಂತಿಗೆ ಕಾರಣವಾಗುವ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಗೊರಕೆ ಉಂಟಾಗುತ್ತದೆ. ಕೆಲವು ಔಷಧಗಳು ಮತ್ತು ಆಲ್ಕೊಹಾಲ್ಯುಕ್ತ ಪಾನೀಯಗಳು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಬಾಯಿ, ಮೂಗು ಮತ್ತು ಗಂಟಲುಗಳಲ್ಲಿ ಗಾಳಿಯ ಹರಿವನ್ನು ನಿರ್ಬಂಧಿಸುತ್ತದೆ, ನಿದ್ರೆಯ ಸಮಯದಲ್ಲಿ ಧ್ವನಿಯನ್ನು ಉತ್ಪಾದಿಸುತ್ತದೆ.
ನಿದ್ರೆಯ ಸ್ಥಾನ
ಬೆನ್ನಿನ ಮೇಲೆ ಮಲಗುವುದು ಗೊರಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಗೊರಕೆ ಉಂಟಾಗುತ್ತದೆ ಏಕೆಂದರೆ ನಾಲಿಗೆಯು ಶ್ವಾಸನಾಳವನ್ನು ನಿರ್ಬಂಧಿಸುತ್ತದೆ.
ನಿದ್ದೆಯ ಅಭಾವ
ನಿದ್ರಾಹೀನತೆಯು ಗಂಟಲು ವಿಶ್ರಾಂತಿಗೆ ಕಾರಣವಾಗಬಹುದು, ಇದರ ಪರಿಣಾಮವಾಗಿ ಗೊರಕೆ ಉಂಟಾಗುತ್ತದೆ.
ಗೊರಕೆಯ ಲಕ್ಷಣಗಳು
ಗೊರಕೆಯು ಕೆಲವೊಮ್ಮೆ ನಿದ್ರಾಹೀನತೆಯ ಲಕ್ಷಣವಾಗಿದೆ. ಆದರೆ ಗೊರಕೆಯ ಕೆಲವು ಲಕ್ಷಣಗಳು ಇಲ್ಲಿವೆ.
ನಿದ್ರೆಯ ಸಮಯದಲ್ಲಿ ಉಸಿರಾಟವು ವಿರಾಮಗೊಳ್ಳುತ್ತದೆ
ಪ್ರತಿರೋಧಕ ನಿದ್ರಾ ಉಸಿರುಕಟ್ಟುವಿಕೆ ಹೊಂದಿರುವ ಜನರಿಗೆ ನಿದ್ರೆಯ ಸಮಯದಲ್ಲಿ ಉಸಿರಾಟದ ವಿರಾಮಗಳು ಸಾಮಾನ್ಯವೆಂದು ಪಬ್ಮೆಡ್ನ ಲೇಖನವು ತಿಳಿಸುತ್ತದೆ. ಗೊರಕೆಯು ಸಾಮಾನ್ಯವಾಗಿ ಪ್ರತಿಬಂಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆಯ ಸಂಕೇತವಾಗಿದೆ.
ಅತಿಯಾದ ಹಗಲಿನ ನಿದ್ರೆ
ರಾತ್ರಿ ನಿದ್ರೆಯ ಪ್ರಕ್ರಿಯೆಯು ಹೆಚ್ಚು ತೊಂದರೆಗೊಳಗಾಗುವುದರಿಂದ ಜೋರಾಗಿ ಗೊರಕೆ ಹೊಡೆಯುವುದರಿಂದ ಹಗಲಿನ ನಿದ್ರೆ ಹೆಚ್ಚಾಗುತ್ತದೆ.
ಕೇಂದ್ರೀಕರಿಸುವಲ್ಲಿ ತೊಂದರೆ
ಗೊರಕೆ ಹೊಡೆಯುವ ಜನರಿಗೆ ಅರಿವಿನ ದುರ್ಬಲತೆ ಸಾಮಾನ್ಯವಾಗಿದೆ ಏಕೆಂದರೆ ಕಳಪೆ ನಿದ್ರೆ ಮೆದುಳಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನೆನಪುಗಳನ್ನು ಸಂಗ್ರಹಿಸುತ್ತದೆ. ಇದು ವ್ಯಕ್ತಿಯ ಏಕಾಗ್ರತೆಯ ಶಕ್ತಿಯನ್ನು ಸಹ ಅಡ್ಡಿಪಡಿಸುತ್ತದೆ.
ಬೆಳಿಗ್ಗೆ ತಲೆನೋವು
ಉಸಿರಾಟದ ವಿರಾಮಗಳು ಸಾಕಷ್ಟು ಆಮ್ಲಜನಕದ ಲಭ್ಯತೆಗೆ ಕಾರಣವಾಗುತ್ತದೆ ಮತ್ತು ರಕ್ತದ ಇಂಗಾಲದ ಡೈಆಕ್ಸೈಡ್ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಗೊರಕೆ ಹೊಡೆಯುವ ಜನರಲ್ಲಿ ಉಸಿರಾಟದ ವಿರಾಮಗಳು ನಿಯಮಿತವಾಗಿ ಕಂಡುಬರುತ್ತವೆ.
ಆಮ್ಲಜನಕದ ಕೊರತೆಯು ಮೆದುಳು ಮತ್ತು ನರಮಂಡಲದ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ, ಇದರ ಪರಿಣಾಮವಾಗಿ ಬೆಳಿಗ್ಗೆ ತಲೆನೋವು ಉಂಟಾಗುತ್ತದೆ.
ಎಚ್ಚರವಾದಾಗ ಗಂಟಲು ನೋವು
ಗೊರಕೆ ಮಾಡುವಾಗ ಬಾಯಿಯ ಮೂಲಕ ಉಸಿರಾಟವು ಆಗಾಗ್ಗೆ ಇರುತ್ತದೆ. ಇದು ಗಂಟಲಿನಲ್ಲಿ ಶುಷ್ಕತೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಅಲ್ಲದೆ, ಗೊರಕೆಯು ಗಂಟಲಿನ ಅಂಗಾಂಶಗಳ ಕಂಪನವನ್ನು ಉಂಟುಮಾಡುತ್ತದೆ, ಇದರ ಪರಿಣಾಮವಾಗಿ ನೋಯುತ್ತಿರುವ ಗಂಟಲು .
ಪ್ರಕ್ಷುಬ್ಧ ನಿದ್ರೆ
ಗೊರಕೆಯು ಪ್ರಕ್ಷುಬ್ಧ ನಿದ್ರೆ ಮತ್ತು ಕಳಪೆ ನಿದ್ರೆಗೆ ಕಾರಣವಾಗಬಹುದು. ಇದು ಮತ್ತೊಂದು ಆಧಾರವಾಗಿರುವ ನಿದ್ರೆಯ ಅಸ್ವಸ್ಥತೆಯನ್ನು ಸಹ ಸೂಚಿಸುತ್ತದೆ.
ಗೊರಕೆಗೆ ಚಿಕಿತ್ಸೆಗಳು
ಜೀವನಶೈಲಿ ಬದಲಾವಣೆಗಳು
ಗೊರಕೆಯನ್ನು ಎದುರಿಸಲು ಕೆಲವು ಜೀವನಶೈಲಿಯ ಬದಲಾವಣೆಗಳು ಸೇರಿವೆ,
ತೂಕವನ್ನು ಕಳೆದುಕೊಳ್ಳಿ: ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವ ವ್ಯಕ್ತಿಗಳಲ್ಲಿ ಗೊರಕೆಯನ್ನು ಆಗಾಗ್ಗೆ ಗಮನಿಸಬಹುದು. ಏಕೆಂದರೆ ಕುತ್ತಿಗೆ ಮತ್ತು ಗಂಟಲಿನಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆಯು ಅಡಚಣೆಯನ್ನು ಉಂಟುಮಾಡುತ್ತದೆ, ಇದರ ಪರಿಣಾಮವಾಗಿ ಗೊರಕೆ ಉಂಟಾಗುತ್ತದೆ. ತೂಕವನ್ನು ಕಳೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿ: ಆಲ್ಕೋಹಾಲ್ ಗಂಟಲಿನ ಸ್ನಾಯುಗಳನ್ನು ಸಾಮಾನ್ಯಕ್ಕಿಂತ ಹೆಚ್ಚು ವಿಶ್ರಾಂತಿ ಮಾಡುತ್ತದೆ, ಗೊರಕೆಗೆ ಕಾರಣವಾಗುತ್ತದೆ.
ತಂಬಾಕು ಸೇವನೆಯನ್ನು ಕಡಿಮೆ ಮಾಡಿ: ತಂಬಾಕು ಸೇವನೆಯು ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಆದರೆ ಅನೇಕ ರೋಗಗಳನ್ನು ತಡೆಯುತ್ತದೆ.
ನಿದ್ರೆಯ ಸ್ಥಾನ: ಹಿಂಭಾಗದಲ್ಲಿ ಮಲಗುವುದು ಗೊರಕೆಯೊಂದಿಗೆ ಸಂಬಂಧಿಸಿರುವುದರಿಂದ, ಪಕ್ಕದಲ್ಲಿ ಮಲಗುವುದನ್ನು ಪ್ರೋತ್ಸಾಹಿಸಲಾಗುತ್ತದೆ. ಹಾಸಿಗೆಯನ್ನು ನಾಲ್ಕು ಇಂಚುಗಳಷ್ಟು ಎತ್ತರಿಸುವುದು ಸಹ ಸಹಾಯಕವಾಗಿದೆಯೆಂದು ಕಂಡುಬರುತ್ತದೆ.
ಮೂಗು ದಟ್ಟಣೆ: ಮೂಗು ಮುಚ್ಚಿದ ಚಿಕಿತ್ಸೆಯು ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೌಖಿಕ ಉಪಕರಣಗಳು
ಮೌಖಿಕ ಉಪಕರಣ ಚಿಕಿತ್ಸೆಯನ್ನು ಗೊರಕೆಗೆ ಪರಿಣಾಮಕಾರಿ ಚಿಕಿತ್ಸಾ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಮಲಗುವ ಸಮಯದಲ್ಲಿ ಮೌಖಿಕ ಉಪಕರಣವನ್ನು ಧರಿಸಲು ಸೂಚಿಸಲಾಗುತ್ತದೆ.
ಇದು ಆರ್ಥೊಡಾಂಟಿಕ್ ರಿಟೈನರ್ನಂತೆ ಹಲ್ಲುಗಳ ಮೇಲೆ ಹೊಂದಿಕೊಳ್ಳುತ್ತದೆ ಮತ್ತು ದವಡೆಯು ಮುಂದಕ್ಕೆ ಉಳಿಯಲು ಬೆಂಬಲಿಸುತ್ತದೆ. ಇದು ವಾಯುಮಾರ್ಗವನ್ನು ತೆರೆದಿಡುತ್ತದೆ.
ಶಸ್ತ್ರಚಿಕಿತ್ಸೆ
ಅಪರೂಪದ ಸಂದರ್ಭಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಗೊರಕೆಗಾಗಿ ಶಸ್ತ್ರಚಿಕಿತ್ಸೆಯ ಆಯ್ಕೆಗಳು ಸೇರಿವೆ,
ರೇಡಿಯೊಫ್ರೀಕ್ವೆನ್ಸಿ ಅಬ್ಲೇಶನ್ ಅಥವಾ ಸೋಮ್ನೋಪ್ಲ್ಯಾಸ್ಟಿ: ನಾಲಿಗೆ ಮತ್ತು ಮೃದು ಅಂಗುಳಿನ ಅಂಗಾಂಶಗಳನ್ನು ಕುಗ್ಗಿಸುವ ಮೂಲಕ ಕೆಲಸ ಮಾಡುತ್ತದೆ.
ಟಾನ್ಸಿಲೆಕ್ಟಮಿ ಮತ್ತು ಅಡೆನಾಯ್ಡೆಕ್ಟಮಿ: ಇದು ಗೊರಕೆಗೆ ಕಾರಣವಾಗುವ ಟಾನ್ಸಿಲ್ ಅಥವಾ ಅಡೆನಾಯ್ಡ್ಗಳನ್ನು ತೆಗೆದುಹಾಕುವ ವಿಧಾನವಾಗಿದೆ .
ಸೆಪ್ಟೋಪ್ಲ್ಯಾಸ್ಟಿ: ಮೂಗಿನಲ್ಲಿ ವಿಚಲನಗೊಂಡ ಸೆಪ್ಟಮ್ ಅನ್ನು ಸರಿಪಡಿಸುತ್ತದೆ, ಗಾಳಿಯ ಹರಿವನ್ನು ಸುಧಾರಿಸುತ್ತದೆ ಮತ್ತು ಗೊರಕೆಯನ್ನು ತಡೆಯುತ್ತದೆ.
ಅಂಗುಳಿನ ಶಸ್ತ್ರಚಿಕಿತ್ಸೆ: ಈ ಶಸ್ತ್ರಚಿಕಿತ್ಸೆಯು ಉಸಿರಾಟಕ್ಕೆ ಅಡ್ಡಿಯಾಗುವ ಮೃದು ಅಂಗುಳಿನ ಅಂಗಾಂಶಗಳನ್ನು ತೆಗೆದುಹಾಕುತ್ತದೆ.
ಪ್ಯಾಲಟಲ್ ಇಂಪ್ಲಾಂಟ್: ಇದನ್ನು ಪಿಲ್ಲರ್ ಸರ್ಜರಿ ಎಂದೂ ಕರೆಯುತ್ತಾರೆ, ಇದು ಗೊರಕೆಗೆ ಚಿಕಿತ್ಸೆ ನೀಡುತ್ತದೆ.
CPAP
ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದಾಗಿ ಗೊರಕೆಯನ್ನು ಗುಣಪಡಿಸಲು ಸಿಪಿಎಪಿ ಚಿಕಿತ್ಸೆಯು ಅತ್ಯುತ್ತಮ ಚಿಕಿತ್ಸೆಗಳಲ್ಲಿ ಒಂದಾಗಿದೆ.
CPAP ಯಂತ್ರಗಳು ರಾತ್ರಿಯಿಡೀ ವ್ಯಕ್ತಿಗೆ ಆಮ್ಲಜನಕವನ್ನು ನಿರಂತರವಾಗಿ ಪೂರೈಸುವ ಮೂಲಕ ಕಾರ್ಯನಿರ್ವಹಿಸುತ್ತವೆ, ವಾಯುಮಾರ್ಗಗಳು ತೆರೆದಿರಲು ಅನುವು ಮಾಡಿಕೊಡುತ್ತದೆ ಮತ್ತು ಗೊರಕೆಗೆ ಕಾರಣವಾಗುವ ಕಂಪನಗಳನ್ನು ತಡೆಯುತ್ತದೆ.
ಗೊರಕೆಯ ಅಪಾಯಕಾರಿ ಅಂಶಗಳು
ಮನುಷ್ಯನಾಗಿರುವುದು
ಇತರ ಸ್ನಾಯುಗಳಂತೆ, ನಿದ್ರೆಯ ಸಮಯದಲ್ಲಿ ನಾಲಿಗೆಯು ವಿಶ್ರಾಂತಿ ಪಡೆಯುತ್ತದೆ ಮತ್ತು ಓರೊಫಾರ್ನೆಕ್ಸ್ನಲ್ಲಿ ಬೀಳುತ್ತದೆ (ನಾಲಿಗೆಯ ಹಿಂದಿನ ಸ್ಥಳ). ಈ ಸ್ಥಳವು ಮಹಿಳೆಯರಿಗಿಂತ ಪುರುಷರಿಗೆ ದೊಡ್ಡದಾಗಿರುವುದರಿಂದ, ಅವರು ಹೆಚ್ಚು ಗೊರಕೆ ಹೊಡೆಯುತ್ತಾರೆ.
ಅಧಿಕ ತೂಕ ಇರುವುದು
ಅಧಿಕ ತೂಕದ ವ್ಯಕ್ತಿಗೆ ಕತ್ತಿನ ಕೊಬ್ಬು ಅಧಿಕವಾಗಿರುತ್ತದೆ, ನಿದ್ರೆಯ ಸಮಯದಲ್ಲಿ ಶ್ವಾಸನಾಳವನ್ನು ಸಂಕುಚಿತಗೊಳಿಸುತ್ತದೆ ಮತ್ತು ಗೊರಕೆಯನ್ನು ಉಂಟುಮಾಡುತ್ತದೆ.
ಕಿರಿದಾದ ವಾಯುಮಾರ್ಗವನ್ನು ಹೊಂದಿರುವುದು
ಮೇಲಿನ ಶ್ವಾಸನಾಳದ ಮೃದು ಅಂಗಾಂಶಗಳು ಕಿರಿದಾದ ಶ್ವಾಸನಾಳದ ಕಾರಣದಿಂದಾಗಿ ಕಂಪಿಸುತ್ತದೆ, ಗೊರಕೆಯ ಶಬ್ದವನ್ನು ಉತ್ಪಾದಿಸುತ್ತದೆ.
ಮದ್ಯಪಾನ ಮಾಡುವುದು
ಒಬ್ಬ ವ್ಯಕ್ತಿಯು ಅಮಲೇರಿದ ಸಂದರ್ಭದಲ್ಲಿ, ಗಂಟಲಿನ ಹಿಂಭಾಗದಲ್ಲಿರುವ ಸ್ನಾಯುಗಳು ಸಾಮಾನ್ಯಕ್ಕಿಂತ ವೇಗವಾಗಿ ಮುಚ್ಚುತ್ತವೆ. ಒಬ್ಬ ವ್ಯಕ್ತಿಯು ಹೆಚ್ಚು ಕುಡಿಯುತ್ತಾನೆ, ಅಂಗಾಂಶಗಳು ಹೆಚ್ಚು ಶಾಂತವಾಗಿರುತ್ತವೆ, ಇದು ಜೋರಾಗಿ ಗೊರಕೆಯನ್ನು ಉಂಟುಮಾಡುತ್ತದೆ.
ಮೂಗಿನ ಸಮಸ್ಯೆಗಳನ್ನು ಹೊಂದಿರುವ
ಮೂಗಿನ ದಟ್ಟಣೆಯು ಬಾಯಿಯ ಉಸಿರಾಟಕ್ಕೆ ಕಾರಣವಾಗುತ್ತದೆ, ಇದು ಗಂಟಲಿನ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಕಾರಣವಾಗುತ್ತದೆ ಮತ್ತು ವ್ಯಕ್ತಿಯು ಗೊರಕೆ ಹೊಡೆಯುತ್ತಾನೆ.
ಗೊರಕೆಯ ಕುಟುಂಬದ ಇತಿಹಾಸವನ್ನು ಹೊಂದಿರುವುದು
ಸ್ಥೂಲಕಾಯತೆ , ಪ್ರತಿರೋಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು ಆನುವಂಶಿಕ ಇತರ ವೈದ್ಯಕೀಯ ಪರಿಸ್ಥಿತಿಗಳು ಮುಂದಿನ ಪೀಳಿಗೆಗೆ ಹರಡಬಹುದು, ಇದು ಗೊರಕೆಗೆ ಕಾರಣವಾಗುತ್ತದೆ.
ಗೊರಕೆ ನಿಲ್ಲಿಸಲು ಮನೆಮದ್ದು
ಬದಿಯಲ್ಲಿ ಮಲಗು
ಶ್ವಾಸನಾಳದ ಸಂಕೋಚನವು ಕಡಿಮೆ ಇರುವುದರಿಂದ ಗೊರಕೆಯನ್ನು ನಿಲ್ಲಿಸಲು ಬದಿಯಲ್ಲಿ ಮಲಗುವುದು ಉತ್ತಮ ಮಾರ್ಗವಾಗಿದೆ.
ಹಾಸಿಗೆಯ ತಲೆಯನ್ನು ಕೆಲವು ಇಂಚುಗಳಷ್ಟು ಮೇಲಕ್ಕೆತ್ತಿ
ಹಾಸಿಗೆಯ ತಲೆಯನ್ನು ಎತ್ತುವ ಮೂಲಕ ವಾಯುಮಾರ್ಗಗಳು ಮತ್ತು ಮೂಗಿನ ಮಾರ್ಗಗಳ ಮೇಲಿನ ಒತ್ತಡ ಮತ್ತು ಸಂಕೋಚನವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.
ಮೂಗಿನ ಪಟ್ಟಿಗಳನ್ನು ಬಳಸಿ
ಮೂಗಿನ ಪಟ್ಟಿಗಳು ಮೂಗಿನ ಹಾದಿಗಳನ್ನು ತೆರೆಯುವ ಮೂಲಕ ದಟ್ಟಣೆಯ ಮೂಗುವನ್ನು ನಿವಾರಿಸುತ್ತದೆ. ಈ ಪಟ್ಟಿಗಳು ಮೂಗಿನ ಬದಿಯನ್ನು ಎಳೆಯುತ್ತವೆ ಮತ್ತು ಮೂಗಿನ ಹೊಳ್ಳೆಗಳನ್ನು ವಿಸ್ತರಿಸುತ್ತವೆ, ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿದ್ರೆಯ ವೇಳಾಪಟ್ಟಿಗೆ ಅಂಟಿಕೊಳ್ಳಿ
ಸರಿಯಾದ ನಿದ್ರೆಯ ವೇಳಾಪಟ್ಟಿಯನ್ನು ನಿರ್ವಹಿಸುವುದು ಮತ್ತು ಪ್ರತಿದಿನ ಸಾಕಷ್ಟು ನಿದ್ರೆ ಪಡೆಯುವುದು ಗೊರಕೆಯನ್ನು ತಡೆಯುತ್ತದೆ ಮತ್ತು ಚಿಕಿತ್ಸೆ ನೀಡುತ್ತದೆ.
ವೈದ್ಯರನ್ನು ಯಾವಾಗ ನೋಡಬೇಕು?
ಗೊರಕೆಯ ಬಗ್ಗೆ ವೈದ್ಯರನ್ನು ಸಂಪರ್ಕಿಸುವುದು ಕ್ಷುಲ್ಲಕವಾಗಿ ಕಾಣಿಸಬಹುದು, ಆದರೆ ಗೊರಕೆಯು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಮತ್ತು ನಿದ್ರೆಯಲ್ಲಿ ಉಸಿರುಕಟ್ಟುವಿಕೆಯನ್ನು ಸೂಚಿಸುತ್ತದೆ.
ವೈದ್ಯರ ಸಮಾಲೋಚನೆಯ ಅಗತ್ಯವನ್ನು ಸೂಚಿಸುವ ಕೆಲವು ಅಂಶಗಳು ಇಲ್ಲಿವೆ.
ವ್ಯಕ್ತಿ ಮತ್ತು ಅವರ ಸಂಗಾತಿಯ ಮೇಲೆ ಪರಿಣಾಮ ಬೀರುವ ಗೊರಕೆ
ಜೋರಾಗಿ ಗೊರಕೆ
ನಿದ್ರಾಹೀನತೆ
ಆಯಾಸ ಮತ್ತು ಮನಸ್ಥಿತಿ ಪ್ರತಿದಿನ ಬದಲಾಗುತ್ತದೆ
ಹಾಸಿಗೆಯಲ್ಲಿ ನಿರಂತರವಾಗಿ ಉಸಿರುಗಟ್ಟಿಸುವುದು ಮತ್ತು ಉಸಿರುಗಟ್ಟಿಸುವುದು
ನಿದ್ರೆಯನ್ನು ತಡೆಯುವ ನೋವು
ಬೆಸ ಗಂಟೆಗಳಲ್ಲಿ ಏಳುವುದು
ಆರೋಗ್ಯ ವೃತ್ತಿಪರರು ಈ ರೋಗಲಕ್ಷಣಗಳನ್ನು ಪರಿಶೀಲಿಸಬಹುದು ಮತ್ತು ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಬಹುದು.
ತೀರ್ಮಾನ
ಗೊರಕೆಯು ಗೊರಕೆ ಹೊಡೆಯುವವರೊಂದಿಗೆ ಹಾಸಿಗೆ ಅಥವಾ ಮಲಗುವ ಕೋಣೆಯನ್ನು ಹಂಚಿಕೊಳ್ಳುವ ವ್ಯಕ್ತಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ದೀರ್ಘಕಾಲದ ಗೊರಕೆಯು ಅವರ ನಿದ್ರೆಯನ್ನು ಅಡ್ಡಿಪಡಿಸಬಹುದು ಮತ್ತು ಮನೆಯಲ್ಲಿ ಸಂಘರ್ಷಕ್ಕೆ ಕಾರಣವಾಗಬಹುದು.
ಗೊರಕೆಯು ನಿಯಮಿತವಾಗಿದ್ದರೂ ಮತ್ತು ಎಲ್ಲರೂ ಸಾಂದರ್ಭಿಕವಾಗಿ ಗೊರಕೆ ಹೊಡೆಯುತ್ತಾರೆ, ಅತಿಯಾದ ಗೊರಕೆಯು ವೈದ್ಯಕೀಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ, ಕಾರಣವನ್ನು ನಿರ್ಣಯಿಸುವುದು ಮತ್ತು ತಜ್ಞರ ಸಹಾಯದಿಂದ ಚಿಕಿತ್ಸೆ ನೀಡುವುದು ಅವಶ್ಯಕ.
ಪದೇ ಪದೇ ಮೂತ್ರದ ಮೂಲಕ ಕುಡಿದ ನೀರೆಲ್ಲಾ ಹೊರಹೋಗುತ್ತಾ? ಅದಕ್ಕೆ ಕಾರಣ ಇಲ್ಲಿದೆಬೇಸಿಗೆಯಲ್ಲಿ ದೇಹದ ನಿರ್ಜಲಿಕರಣವನ್ನು ತಡೆಯಲು ಆದಷ್ಟು ನೀರನ್ನು ಕುಡಿಯುವಂತೆ ತಜ್ಞರು ಸಲಹೆ ನೀಡುತ್ತಾರೆ. ನೀರು ಕುಡಿಯೋದೆಂದರೆ ಒಟ್ಟಾರೆ ಸಿಕ್ಕಿದ ನೀರನ್ನು ಕುಡಿಯುವುದಲ್ಲ. ಕೊಳಕು ಮತ್ತು ಕಲುಷಿತ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ಹೆಚ್ಚಿನವರು ಫಿಲ್ಟರ್ ವಾಟರ್ RO ನೀರನ್ನು ಸ್ವಚ್ಛಗೊಳಿಸುವಾಗ ಅದರಲ್ಲಿರುವ ಖನಿಜಗಳನ್ನು ತೆಗೆದುಹಾಕುತ್ತದೆ.
ಪೌಷ್ಟಿಕತಜ್ಞೆ ರಿದ್ಧಿಮಾ ಬಾತ್ರಾ ಅವರು ಖನಿಜಗಳಿಲ್ಲದ ನೀರನ್ನು ಕುಡಿಯುವುದರಿಂದ ದೇಹವು ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ಇದು ಆಗಾಗ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ.
ಈ ಖನಿಜಗಳು ಇಡೀ ದೇಹಕ್ಕೆ ಅವಶ್ಯಕ
ನಮ್ಮ ದೇಹದ ಪ್ರತಿಯೊಂದು ಸ್ನಾಯು ಮತ್ತು ನರಗಳಿಗೆ ನೀರು ಮತ್ತು ಉಪ್ಪಿನಲ್ಲಿರುವ ಖನಿಜಗಳು ಅತ್ಯಗತ್ಯ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಈ ಖನಿಜಗಳನ್ನು ಎಲೆಕ್ಟ್ರೋಲೈಟ್ಸ್ ಎಂದು ಕರೆಯಲಾಗುತ್ತದೆ, ಅವುಗಳ ಹೆಸರುಗಳು ಪೊಟ್ಯಾಸಿಯಮ್, ಸೋಡಿಯಂ, ಕ್ಯಾಲ್ಸಿಯಂ, ಕ್ಲೋರೈಡ್ ಇತ್ಯಾದಿ.
ಕಡಿಮೆ ಎಲೆಕ್ಟ್ರೋಲೈಟ್ ಕಾರಣ
ದೇಹವು ಬೆವರಿನೊಂದಿಗೆ ವಿದ್ಯುದ್ವಿಚ್ಛೇದ್ಯಗಳನ್ನು ಕಳೆದುಕೊಳ್ಳುತ್ತದೆ. ವಿಪರೀತ ಬೆವರುವಿಕೆ ಇದ್ದಾಗ, ಅವರ ಮಟ್ಟವು ವೇಗವಾಗಿ ಕಡಿಮೆಯಾಗುತ್ತದೆ. ಶಾಖದ ಅಲೆ, ಬಿಸಿ ಗಾಳಿ, ವ್ಯಾಯಾಮ, ಒತ್ತಡ ಮತ್ತು ಅನಾರೋಗ್ಯದ ಕಾರಣದಿಂದಾಗಿ ಅತಿಯಾದ ಬೆವರುವಿಕೆ ಸಂಭವಿಸುತ್ತದೆ.
ಫಿಲ್ಟರ್ ಮತ್ತು RO ನೀರಿಗೆ ಈ ವಸ್ತುಗಳನ್ನು ಹಾಕಿ
ಸಮುದ್ರ ಉಪ್ಪು ಹಾಕಿ ನಿಂಬೆ ಸ್ಲೈಸ್ ಹಾಕಿ ಶುಂಠಿ ತುಂಡು ಹಾಕಿ ಕಲ್ಲಂಗಡಿ ತುಂಡು ಹಾಕಿ ಎಳ ನೀರನ್ನು ಹಾಕಿ
ಎಳ ನೀರಿನ ಪ್ರಯೋಜನಗಳು
ಎಲೆಕ್ಟ್ರೋಲೈಟ್ಗಳನ್ನು ಪಡೆಯಲು ನೀವು ಎಳ ನೀರನ್ನು ಸೇವಿಸಬಹುದು. ನೀವು ಅದರಲ್ಲಿ ಏನನ್ನೂ ಬೆರೆಸುವ ಅಗತ್ಯವಿಲ್ಲ. ಏಕೆಂದರೆ, ನೈಸರ್ಗಿಕವಾಗಿ ಅಗತ್ಯವಾದ ಖನಿಜಗಳು ಅದರೊಳಗೆ ಇರುತ್ತವೆ.
ಈ ವಸ್ತುಗಳನ್ನು ನೀರಿನಲ್ಲಿ ಬೆರೆಸುವುದು ಹೇಗೆ?
ಈ ವಸ್ತುಗಳನ್ನು ಮಿಶ್ರಣ ಮಾಡಲು, ಫಿಲ್ಟರ್ ಮಾಡಿದ ಅಥವಾ RO ನೀರನ್ನು ಜಗ್ ಅಥವಾ ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿ. ನಂತರ ಮೇಲೆ ತಿಳಿಸಿದ ಯಾವುದಾದರೂ ಒಂದನ್ನು ಸಣ್ಣ ಪ್ರಮಾಣದಲ್ಲಿ ಸೇರಿಸಿ ಮತ್ತು 2 ರಿಂದ 3 ಗಂಟೆಗಳ ಕಾಲ ಬಿಡಿ. ನಂತರ ಅದನ್ನು ಕುಡಿಯಬಹುದು.