ಸಮುದ್ರ ಮಂಥನದ ಸಮಯದಲ್ಲಿ ವಿಷವನ್ನು ಕುಡಿದ ಪಾಂಚಜನ್ಯ ಶಂಖದ ಬಗ್ಗೆ ಕಿರು ಪರಿಚಯ.




ಸಮುದ್ರ ಮಂಥನದ ಸಮಯದಲ್ಲಿ ವಿಷವನ್ನು ಕುಡಿದ ಪಾಂಚಜನ್ಯ ಶಂಖದ ಬಗ್ಗೆ ಕಿರು ಪರಿಚಯ.

ವಿಶ್ವದ ಪ್ರಾಚೀನ ಧರ್ಮಗಳಲ್ಲಿ ಸನಾತನ ಹಿಂದೂ ಧರ್ಮವು ಪ್ರಮುಖವಾಗಿದೆ. ಭಾರತವನ್ನು ಹಾಗೂ ಭಾರತದ ಸಂಸ್ಕೃತಿಯನ್ನು ವಿದೇಶದಲ್ಲಿ ಸಹ ಗೌರವಿಸುತ್ತಾರೆ ಎಂದರೆ ನಮ್ಮ ಸನಾತನ ಕಾಲದ ಧರ್ಮದಿಂದ ಎಂಬುದು ವಿಶೇಷವಾದ ಸಂಗತಿ. ದೇವ-ದಾನವರ ನಡುವೆ ನಡೆದ ಸಮುದ್ರಮಂಥನದ ಬಗ್ಗೆ ವಿವಿಧ-ಪುರಾಣಗಳಲ್ಲಿ ಎಲ್ಲರೂ ಓದಿರುತ್ತಾರೆ. ಕ್ಷೀರಸಾಗರದಲ್ಲಿರುವ ಅಮೃತವನ್ನು ಪಡೆಯಲು ದೇವತೆಗಳು ಹಾಗೂ ಅಸುರರು ಸಮುದ್ರ ಮಂಥನವನ್ನು ಮಾಡಬೇಕಾಗಿರುತ್ತದೆ. ಮಹಾವಿಷ್ಣುವಿನ ಸಲಹೆಯಂತೆ ಹಿಮಾಲಯದಲ್ಲಿರುವ ಮಂದಾರ ಪರ್ವತವನ್ನು ಕಡಗೋಲಾಗಿಸಿಕೊಂಡು ದೇವದಾನವರು ಸಮುದ್ರಮಂಥನದ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ.

ಸಮುದ್ರ ಮಂಥನದ ಸಮಯದಲ್ಲಿ ಬೇಕಾಗಿರುವ ಹಾಗೂ ಅನಗತ್ಯ ವಸ್ತುಗಳು ಉದ್ಭವವಾಗುತ್ತದೆ. ಅದರಲ್ಲಿ ಕಾರ್ಕೋಟಕ ವಿಷವು ಸಹ ಒಂದಾಗಿದೆ. ಕಾರ್ಕೋಟಕ ವಿಷದಿಂದ ಇಡೀ ಜಗತ್ತೇ ಸಂಕಷ್ಟವನ್ನು ಎದುರಿಸ ಬೇಕಾಗುತ್ತದೆ ಎಂಬುದನ್ನು ಅರಿತಾಗ ಶಿವ ಪರಮಾತ್ಮರು ಪಾಂಚಜನ್ಯ ಶಂಕದಿಂದ ಅದನ್ನು ಹಿಡಿದು ಕುಡಿದು ಬಿಡುತ್ತಾರೆ. ಅಂದು ಶಿವಪರಮಾತ್ಮರು ಪಾಂಚಜನ್ಯ ಶಂಖದಿಂದ ಕಾರ್ಕೋಟಕ ವಿಷವನ್ನು ಕುದಿದಿದ್ದರು. ಆದರೆ ಇಂದಿಗೂ ಆ ಪಾಂಚಜನ್ಯವು ನಮ್ಮ ಭಾರತ ದೇಶದಲ್ಲಿ ನೋಡಲು ಸಿಗುತ್ತದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗುವುದರಲ್ಲಿ ಅಚ್ಚರಿಯಿಲ್ಲ.

ಈ ಪಾಂಚಜನ್ಯ ಶಂಖ ಇರುವುದು ಬಿಹಾರ ಜಿಲ್ಲೆಯ ಭಾಗಪುರ ಗ್ರಾಮದಿಂದ 40 ಕಿಲೋಮೀಟರ್ ದೂರದಲ್ಲಿರುವ ಮಂದಾರ ಪರ್ವತ ಎಂಬ ಊರಿನಲ್ಲಿ. ದೇವದಾನವರು ಸಮುದ್ರ ಮಂಥನ ಸಮಯದಲ್ಲಿ ಕಡುಗೋಲಾಗಿ ಉಪಯೋಗಿಸಿದ್ದು ಇದೆ ಮಂದಾರ ಪರ್ವತವನ್ನು. ಹಾಗಾಗಿ ಹಿಂದೂ ಧರ್ಮದವರು ಈ ಕ್ಷೇತ್ರವನ್ನು ಪವಿತ್ರ ಕ್ಷೇತ್ರವೆಂದು ಪೂಜ್ಯ ಭಾವನೆಯಿಂದ ನೋಡುತ್ತಾರೆ.

ಈ ಸ್ಥಳದಲ್ಲಿರುವ ಶಂಖ ಕುಂಡದಲ್ಲಿ ಯಾವಾಗಲೂ ನೀರು ಇರುತ್ತದೆ, ಆದರೆ ಶಿವರಾತ್ರಿಯ ಸಂದರ್ಭದಲ್ಲಿ ನೀರಿನ ಮಟ್ಟ ಸ್ವಲ್ಪ ತಗ್ಗಿರುತ್ತದೆ. ಆದರೆ ಈ ಸಂದರ್ಭದಲ್ಲಿ ಬೃಹತಾಕಾರದ ಶಂಖವು ಕಾಣಲು ಸಿಗುತ್ತದೆ. ಈ ಶಂಖವು ಯಾವುದೆಂದರೆ ಸಮುದ್ರ ಮಂಥನದ ಸಮಯದಲ್ಲಿ ಶಿವಪರಮಾತ್ಮ ಕಾರ್ಕೋಟಕ ವಿಷವನ್ನು ಕುಡಿದಿದ್ದು ಇದೇ ಪಾಂಚಜನ್ಯ ಶಂಖದಿಂದ. ಶಿವರಾತ್ರಿಯ ಸಂದರ್ಭದಲ್ಲಿ ಮಾತ್ರ ಈ ಪಾಂಚಜನ್ಯ ಶಂಖವೂ ಕುಂಡದಿಂದ ಹೊರಗೆ ಕಾಣಲು ಸಿಗುತ್ತದೆ. ಉಳಿದ 364 ದಿನ 80 ಅಡಿ ಆಳದಲ್ಲಿ ಮುಳುಗಿರುತ್ತದೆ ಎಂಬುದೇ ಆಶ್ಚರ್ಯಕರ ಸಂಗತಿ.






ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...